ನಮ್ಮ ಬಾಲ ಬಳಗ ಶಾಲೆಯ ಮತ್ತೊಂದು ಕನಸು ನನಸಾಗುತ್ತಿದೆ. ಅದುವೇ ಹೊಸದಾಗಿ ನಿರ್ಮಾಣಗೊಂಡಿರುವ ನಮ್ಮ ಮಗು ಸ್ನೇಹಿ ಮತ್ತು ಪರಿಸರ ಸ್ನೇಹಿ ಗ್ರಂಥಾಲಯ. ಒಂದು ಒಳ್ಳೆಯ ಶಾಲೆ ಮಗುವಿಗೆ ಸ್ವಂತಕಲಿಕೆಯನ್ನು ಕಲಿಸಬೇಕು . ಅದು ಪುಸ್ತಕಗಳಿಂದ ಸಾಧ್ಯ. ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ,ಮರಣದಿಂದ ಅಮರದ ಕಡೆಗೆ ಒಯ್ಯುವ ಪರಿಣಾಮಕಾರಿ ಸಾಧನವೆಂದರೆ ಒಂದು ಒಳ್ಳೆಯ ಪುಸ್ತಕ . ಈ ಗ್ರಂಥಾಲಯ ಕೇವಲ ಮಕ್ಕಳಿಗಾಗಿ ಅಲ್ಲ ; ಇದು ಶಿಕ್ಷಕರಿಗೂ ಹೌದು ಬಾಲ ಬಳಗದ ಪಾಲಕರಿಗೂ ಹೌದು ಮತ್ತು ಸಾರ್ವಜನಿಕರಿಗೂ ಹೌದು ! ಈ ಗ್ರಂಥಾಲಯದಲ್ಲಿ ಮಕ್ಕಳ ಬೆಳವಣಿಗೆ, ಪಾಲಕತ್ವ ,ಶಿಕ್ಷಣ, ಆರೋಗ್ಯ, ಪರಿಸರ, ಜೀವನಶೈಲಿ, ಜ್ಞಾನ ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಓದುಗರಿಗೆ ಸಿಗಲಿವೆ. ಕಾದಂಬರಿ ಕತೆ ಕಾವ್ಯ ನಾಟಕ ಇತ್ಯಾದಿ ಕ್ಷೇತ್ರಗಳ ಪುಸ್ತಕಗಳೂ ಇರುತ್ತವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಗ್ರಂಥಾಲಯವನ್ನು ಶಾಲಾ ಸಮಯದ ನಂತರ ಅಂದರೆ ಸಂಜೆ ಆರರಿಂದ ಒಂಬತ್ತು ಗಂಟೆಯವರೆಗೆ ಹಾಗೂ ರವಿವಾರ ಮತ್ತು ಇತರೆ ರಜಾ ದಿನಗಳಲ್ಲಿ ಮುಂಜಾನೆ ಒಂಬತ್ತರಿಂದ ಮಧ್ಯಾಹ್ನ ಹನ್ನೆರಡರ ರವರೆಗೆ ತೆರೆದಿಟ್ಟು ಪಾಲಕರು ಮತ್ತು ಸಾರ್ವಜನಿಕರು ಇದರ ಉಪಯೋಗ ಪಡೆಯುವ ಹಾಗೆ ಮಾಡಬೇಕೆಂಬುದು ನಮ್ಮ ಯೋಜನೆ .
4ನೇ ತರಗತಿಯ ಮಕ್ಕಳಿಗೆ ಉಡುಪು ವಿನ್ಯಾಸ ಪಾಠಕ್ಕೆ ಸಂಬಂಧಿಸಿದಂತೆ ಚಟುವಟಿಕೆಯನ್ನು ಮಾಡಿಸಲಾಯಿತು . ಈ ಚಟುವಟಿಕೆ ಮಾಡುವ ಮುಖ್ಯ ಉದ್ದೇಶ ವೆಂದರೆ ಉಡುಪುಗಳು ಹೇಗೆ ಸಿದ್ಧವಾಗುತ್ತವೆ ಮತ್ತು ಯಾವ ಕಾಲದಲ್ಲಿ ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು, ಬಟ್ಟೆಯ ವಿಧಗಳು ಮತ್ತು ವಿವಿಧ ರಾಜ್ಯಗಳ ಉಡುಪುಗಳ ಪರಿಚಯ ಮತ್ತು ಅಲ್ಲಿಯ ಭಾಷೆ ಆಹಾರ ಇವುಗಳ ಬಗ್ಗೆ ತಿಳಿದುಕೊಂಡರು.
ದಿನಾಂಕ 2/6 /25ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೆಎಸ್ಎಸ್ ವಿದ್ಯಾ ಗಿರಿ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿದ್ದರು . ಮಕ್ಕಳು ಬಹಳ ಖುಷಿಯಿಂದ ಪಾಲ್ಗೊಂಡಿದ್ದರು.
ಪಾಲಕರ ಹಬ್ಬ ಮುಗಿದರೂ ಅದರ ಸವಿನೆನಪು ಉಳಿದಿದೆ.ಕಾರ್ಯಕ್ರಮದ ಯಶಸ್ಸಿಗೆ ತಾವೆಲ್ಲ ಕಾರಣರು. ಎಲ್ಲರಿಗೂ ವಂದನೆಗಳು
ಪಾಲಕರ ಹಬ್ಬ ಮುಗಿದರೂ ಅದರ ಸವಿನೆನಪು ಉಳಿದಿದೆ.ಕಾರ್ಯಕ್ರಮದ ಯಶಸ್ಸಿಗೆ ತಾವೆಲ್ಲ ಕಾರಣರು. ಎಲ್ಲರಿಗೂ ವಂದನೆಗಳು
ಒಂದು ಸಂತೋಷದ ವಿಷಯ!!!! ಚಿನ್ನ ರ ಚಿಲಿಪಿಲಿ ನಾಟಕೋತ್ಸವದಲ್ಲಿ ನಮ್ಮ ಶಾಲೆಯ ಎಂಟನೇ ತರಗತಿ ಮಕ್ಕಳಿಗೆ "ಒಗಟಿನ ರಾಣಿ" ನಾಟಕವನ್ನು ಪ್ರದರ್ಶನ ಮಾಡಲು ಅವಕಾಶ ಸಿಕ್ಕಿದೆ.
ಮತ್ತು ಸಂಗೀತ ಮೌಶಿ ದಿನಾಂಕ 15/09/2024 ರಂದು 8ನೇ ತರಗತಿಯ ಮಕ್ಕಳನ್ನು ಹೊರ ಸಂಚಾರಕ್ಕೆಂದು ಗದಗ ಮತ್ತು ಲಕ್ಕುಂಡಿಗೆ ಕರೆದುಕೊಂಡು ಹೋಗಿದ್ದೆವು. ಶಾಲೆಯಿಂದ 7 ಗಂಟೆಗೆ ಬಿಟ್ಟು ಮೊದಲು ಅಮೃತೇಶ್ವರ ದೇವಸ್ಥಾನಕ್ಕೆ ಹೋಗಿ, ಅಲ್ಲಿ ದೇವರ ದರ್ಶನ ಪಡೆದುಕೊಂಡು.ಅಲ್ಲಿಂದ ಲಕ್ಕುಂಡಿಗೆ ಹೋದೆವು. ನಮಗೆ ಆರ್ಕಿಲಾಜಿಕಲ್ ಡಿಪಾರ್ಟ್ಮೆಂಟ್ ಅವರು ಒಬ್ಬ ಗೈಡನ್ನು ವ್ಯವಸ್ಥೆ ಮಾಡಿದ್ದರು ಅವರು ನಮಗೆ ಸವಿಸ್ತಾರವಾಗಿ ಎಲ್ಲವನ್ನು ಬಹಳ ಸೊಗಸಾಗಿ ಶಿಲ್ಪ ಕಲೆ ಮತ್ತು ಲಕ್ಕುಂಡಿಯ ಅಲ್ಲಿರುವ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅಲ್ಲಿಂದ ಊಟ ಮಾಡಿಕೊಂಡು ವೀರನಾರಾಯಣ ಗುಡಿ ಮತ್ತು ತ್ರಿಕೋಟೇಶ್ವರ ಗುಡಿಗಳನ್ನು ನೋಡಿಕೊಂಡು ಧಾರವಾಡಕ್ಕೆ ಹಿಂತಿರುಗಿದೆವು. ಮಕ್ಕಳು ಬಹಳ ಸಂತೋಷ ಪಟ್ಟರು ಮತ್ತು ಬಹಳಷ್ಟು ಇತಿಹಾಸದ ಬಗ್ಗೆ ಕಲಿತರು ನಮಗೂ ಕೂಡ ಬಹಳಷ್ಟು ವಿಷಯಗಳು ತಿಳಿದು ಬಂದವು. ಎಲ್ಲರೂ ಒಂದು ಸಲಿ ನೋಡಲೇಬೇಕಾದಂತ ಸ್ಥಳಗಳು ಅವಾಗಿವೆ.
Independence Day celebration in school
ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಾಡುಗಳು, ಭಾಷಣ, ರಸಪ್ರಶ್ನೆಇತ್ಯಾದಿ ಕಾರ್ಯಕ್ರಮಗಳು
ಸ್ವಾತಂತ್ರ್ಯ ದಿನದ ಅಂಗವಾಗಿ ಪಾಲಕರಿಗೆ ಚಿತ್ರಕಲೆ ಚಟುವಟಿಕೆಯನ್ನು ಆಯೋಜಿಸಲಾ
ಮಗು ಸ್ನೇಹಿ ಮತ್ತು ಪರಿಸರ ಸ್ನೇಹಿ ಗ್ರಂಥಾಲಯ
ಇಂದು ನಮ್ಮ ಶಾಲೆಯಲ್ಲಿ ಮಧ್ಯಾಹ್ನ 2:30 ರಿಂದ 5:00 ರವರೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಮನಮೋಹಕ ಸಂಗೀತ ಕಲಾ ಪ್ರದರ್ಶನ ಜರುಗಿತು. ಮುಖ್ಯಾಂಶಗಳು : ವೈವಿಧ್ಯಮಯ ಪ್ರದರ್ಶನ: 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಕ್ತಿಗೀತೆ, ಜಾನಪದ, ವಚನ ಹಾಗೂ ವಿವಿಧ ರಾಗಗಳ ಗಾಯನ ಪ್ರಸ್ತುತಪಡಿಸಿದರು. ವಾದನ ವೈಭವ: ಹಾರ್ಮೋನಿಯಂನಲ್ಲಿ ಅಲಂಕಾರಗಳು, ರಾಗಗಳು ಹಾಗೂ ತಬಲಾದಲ್ಲಿ ಸೋಲೋ ತಬಲಾ ವಾದನ ಮತ್ತು ಗಾಯನಕ್ಕೆ ಸಾಥಿ ನೀಡಿದರು . ಸಂಗೀತದ ಮಹತ್ವ ಮತ್ತು ಮಕ್ಕಳ ಸಮಗ್ರ ಬೆಳವಣಿಗೆ : ಸಂಗೀತ ಶಿಕ್ಷಕಿ ಕು. ಶ್ರೇಯಶ್ರೀ ಬಳ್ಳಾರಿ ಅವರು ತಿಳಿಸಿದರು (ವಿವರಣೆ )
ಇಂದು ನಮ್ಮ ಶಾಲೆಯಲ್ಲಿ ಮಧ್ಯಾಹ್ನ 2:30 ರಿಂದ 5:00 ರವರೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಮನಮೋಹಕ ಸಂಗೀತ ಕಲಾ ಪ್ರದರ್ಶನ ಜರುಗಿತು. ಮುಖ್ಯಾಂಶಗಳು : ವೈವಿಧ್ಯಮಯ ಪ್ರದರ್ಶನ: 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಕ್ತಿಗೀತೆ, ಜಾನಪದ, ವಚನ ಹಾಗೂ ವಿವಿಧ ರಾಗಗಳ ಗಾಯನ ಪ್ರಸ್ತುತಪಡಿಸಿದರು. ವಾದನ ವೈಭವ: ಹಾರ್ಮೋನಿಯಂನಲ್ಲಿ ಅಲಂಕಾರಗಳು, ರಾಗಗಳು ಹಾಗೂ ತಬಲಾದಲ್ಲಿ ಸೋಲೋ ತಬಲಾ ವಾದನ ಮತ್ತು ಗಾಯನಕ್ಕೆ ಸಾಥಿ ನೀಡಿದರು . ಸಂಗೀತದ ಮಹತ್ವ ಮತ್ತು ಮಕ್ಕಳ ಸಮಗ್ರ ಬೆಳವಣಿಗೆ : ಸಂಗೀತ ಶಿಕ್ಷಕಿ ಕು. ಶ್ರೇಯಶ್ರೀ ಬಳ್ಳಾರಿ ಅವರು ತಿಳಿಸಿದರು